ಸಂತೆಬೆನ್ನೂರು : ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿ 19 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ .
ಚಿತ್ರದುರ್ಗದ ದನದ ಸಂತೆಯಿಂದ ರೈತರ ಬಳಿ ಕಡಿಮೆ ಬೆಲೆಗೆ ಖರೀದಿಸಿ ಖಾಸಾಯಿಖಾನೆಗೆ ತರುತಿದ್ದ ವೇಳೆ ಸಂತೇಬೆನ್ನೂರು ಹೊರವಲಯದ ಚೌಡೇಶ್ವರಿ ದೇವಸ್ಥಾನದ ಬಳಿ 5 ವಾಹನಗಳಲ್ಲಿ ಅಕ್ರಮವಾಗಿ ತರುತಿದ್ದ 19 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ . ಬಂಧಿತರಿಂದ 15 ಎಮ್ಮೆ , 3 ಹಸುಕರುಗಳು ಹಾಗೂ 1 ಹಸುವನ್ನ ರಕ್ಷಣೆ ಮಾಡಲಾಗಿದೆ 14,23000 ರೂಪಾಯಿಗಳ ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇದರ ಬಗ್ಗೆ ಸಂತೇಬೆನ್ನುರು ಪಿ .ಎಸ್.ಐ . ಶಿವರುದ್ರಪ್ಪ ಮೇಟಿ ಹಾಗೂ ಅವರ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಶ್ಲಾಗಿಸಿದ್ದಾರೆ.